ದಾರಿತಪ್ಪಿ ನಡೆದರೂ

ದಾರಿತಪ್ಪಿ ನಡೆದರೂ

ಮಾನತಪ್ಪಿ ನುಡಿದರೂ
ತಾಯಿಯಂತೆ ಕ್ಷಮಿಸಿ ನಮ್ಮ
ಕಾಯುತಿರುವ ಪ್ರೀತಿಯೇ, ಋತು ರೂಪದ ನೀತಿಯೆ

ಯಾರ ಆಜ್ಞೆಸಲಿಸಲೆಂದು
ರಾಶಿ ಚಿಗುರ ತರುವೆ?
ಯಾರ ಬರವ ಹಾರೈಸಿ
ನೆಲಕೆ ಹಸಿರ ಸುರಿವೆ?
ಯಾರ ಒಲುಮೆ ಉಕ್ಕಿ ಪತ್ರ ಮರಮರದಲು ಬರೆವೆ?

ಹಿಮದ ಹಸ್ತ ಅಳಿಸಿ ತೆಗೆದ
ಜಗದ ಬಾಳ ತಿಲಕವ
ಮತ್ತೆ ಇರಿಸಿ ರತಿಗೆ ಸಲಿಸಿ,
ಜೀವಮೊಳಸುವಾಟವ
ತಿರುಗಿ ತಿರುಗಿ ತೋರುತಿರುವೆ ಕಾಮನೊಂದು ಬೇಟವ!

ಕಾಣದಂತೆ ಮರೆಗೆ ನಿಂತು
ಕಾಯ್ದ ಒಂದು ತತ್ವವ,
ಲೀಲೆಯಲ್ಲಿ ತನ್ನ ಹೀಗೆ
ಮರೆಸಿ ನುಡಿವ ಸತ್ಯವ
ಧ್ವನಿಸುವೆಯೋ ಹೇಗೆ ನೀನು ಸಾವಿಲ್ಲದ ನಿತ್ಯವ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೨೪
Next post ಕಾವ್ಯ ಕನ್ನಿಕೆ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys